ಕಲಾ ಭಾಂದವ್ಯ ಪ್ರಶಸ್ತಿಯಿಂದ ಕಲಾವಿದ-ಯಜಮಾನರ ಭಾಂದವ್ಯ ವೃದ್ದಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ನವ೦ಬರ್ 19 , 2015
|
ನವ೦ಬರ್ 19, 2015
|
ಕಲಾ ಭಾಂದವ್ಯ ಪ್ರಶಸ್ತಿಯಿಂದ ಕಲಾವಿದ-ಯಜಮಾನರ ಭಾಂದವ್ಯ ವೃದ್ದಿ
ಶಿರಿಯಾರ :
ಕಲಾವಿದರೊಬ್ಬರ ಹೆಸರಿನಲ್ಲಿ ಮೇಳದ ಯಜಮಾನರು ಪ್ರತೀವರ್ಷ ಪ್ರಶಸ್ತಿ ನೀಡುತ್ತಿರುವುದರಿಂದ ಕಲಾವಿದ ಯಜಮಾನರ ನಡುವಿನ ಭಾಂದವ್ಯ ವೃದ್ದಿಯಾಗುತ್ತದೆ. ಸಾಲಿಗ್ರಾಮ ಮೇಳದವರು ಪ್ರತೀವರ್ಷ ಮೇಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ರಂಗಸ್ಥಳದಲ್ಲೇ ಮರಣಪಟ್ಟ ಕಲಾ ತಪಸ್ವಿ ಶಿರಿಯಾರ ಮಂಜುನಾಯ್ಕರ ಹೆಸರಿನಲ್ಲಿ ಕಲಾವಿದರೊಬ್ಬರಿಗೆ ಪ್ರಶಸ್ತಿ ನೀಡುತ್ತಿರುವುದು ಇತರರಿಗೆ ಮಾದರಿ ಎಂದು ಮಣಿಪಾಲ ಎಂ.ಐ.ಟಿ ಪ್ರಾಧ್ಯಾಪಕ ಎಸ್.ವಿ.ಉದಯ ಕುಮಾರ ಶೆಟ್ಟರು ಹೇಳಿದರು.
ಅವರು ಶಿರಿಯಾರದಲ್ಲಿ ಸಾಲಿಗ್ರಾಮ ಮೇಳದ ಪ್ರಥಮ ಡೇರೆ ಆಟದಲ್ಲಿ ಶಿರಿಯಾರ ಮಂಜುನಾಯ್ಕರ ಹೆಸರಿನಲ್ಲಿ ನೀಡುವ ಕಲಾಭಾಂದವ್ಯ ಪ್ರಶಸ್ತಿಯನ್ನು ಮಾರಣಕಟ್ಟೆ ಮೇಳದ ಹಿರಿಯ ಕಲಾವಿದ ಐರುಬೈಲು ಆನಂದ ಶೆಟ್ಟರಿಗೆ ಪ್ರದಾನ ಮಾಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಮತ್ತು ಗಣೇಶಪ್ರಸಾದ್ ಅರಾಟೆಯವರು ಆಗಮಿಸಿದ್ದರು. ಶಿರಿಯಾರ ಮಂಜುನಾಯ್ಕರ ಪುತ್ರ ರಮೇಶಮಂಜು ಸ್ವಾಗತಿಸಿ ಧನ್ಯವಾದ ನೀಡಿದರು. ಶ್ರೀನಿವಾಸ ಹಿರಿಯಡ್ಕ ಸನ್ಮಾನಪತ್ರ ವಾಚಿಸಿದರು. ಮೇಳದ ವ್ಯಸ್ಥಾಪಕ ಪಿ.ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.
|
|
|